ವಿಷಯಕ್ಕೆ ಹೋಗು

ಶ್ರೀವಿಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತಿಚಿಗೆ ಈ ಕೃತಿಯ ಕರ್ತೃ ಶ್ರೀವಿಜಯನೆಂದು ದೃಢಪಟ್ಟಿದೆ.

ಕವಿರಾಜಮಾರ್ಗವು 'ದಂಡಿಯ'ಕಾವ್ಯಾದರ್ಶದ' ಅನುವಾದವಾಗಿದೆ.

ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕರ್ನಾಟಕದ ಕುರಿತು ವರ್ಣಿಸಿದ್ದಾನೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆವಿಗೆ ಹರಡಿತ್ತು ಎಂದು ತಿಳಿಸಿದ್ದಾನೆ.


ಪದನರಿದುನುಡಿಯಲುಂ ನುಡಿದುದನರಿದಾರಯಲು ಮಾರ್ಪರಾನಾಡವರ್ಗಳದ, ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತ ಮತಿಗಳ್.

ಎಂದೂ ಕವಿರಾಜಮಾರ್ಗನು ಮನತುಂಬಿ ಹಾಡಿ ಹೊಗಳಿದ್ದಾನೆ.


ಕನ್ನಡಿಗರ ಗುಣ ಸ್ವಭಾವ ಕುರಿತು ಹೇಳುತ್ತಾ, ಕವಿರಾಜಮಾರ್ಗಕಾರನು ತನ್ನ ಕಾಲದ ಭಾಷಾ ಸಾಹಿತ್ಯಗಳನ್ನು ಕುರಿತು ಅಮೂಲ್ಯವಾದ ವಿಷಯಗಳನ್ನು ತಿಳಿಸುತ್ತಾನೆ. ಕನ್ನಡದಲ್ಲಿ 'ಚತ್ತಾಣ', 'ಬೆದಂಡೆ' ಎಂಬ ಎರಡು ಕಾವ್ಯ ರೂಪಗಳನ್ನು ಹೆಸರಿಸಿ, ಇತರ ಸಾಹಿತ್ಯ ಪ್ರಕಾರಗಳನ್ನು ತಿಳಿಸುತ್ತಾನೆ.

-ಕೃಪೆ ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ - ಸಂಪಾದಕ ಡಾ. ಚಿ.ಸಿ. ನಿಂಗಣ್ಣ.

"https://kn.chped.com/w/index.php?title=ಶ್ರೀವಿಜಯ&oldid=1146621" ಇಂದ ಪಡೆಯಲ್ಪಟ್ಟಿದೆ