ವಿಷಯಕ್ಕೆ ಹೋಗು

ಏಳು ಸಾಮಾಜಿಕ ಪಾಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಏಳು ಸಾಮಾಜಿಕ ಪಾಪಗಳನ್ನು ಮೊಟ್ಟಮೊದಲಿಗೆ ಪಟ್ಟಿ ಮಾಡಿದವರು ಫ್ರೆಡ್ರಿಕ್ ಲೂಯಿಸ್ ಡೊನಾಲ್ಡ್ಸನ್. ಕ್ರೈಸ್ತ ಪಾದ್ರಿಯಾಗಿದ್ದ ಇವರು ವೆಸ್ಟ್ ಮಿನ್ಸ್ಟರ್ ಅ್ಯಬ್ಬಿಯಲ್ಲಿ ಮಾರ್ಚ್ ೨೦, ೧೯೨೬ ರಂದು ನೀಡಿದ ಉಪದೇಶದಲ್ಲಿ ಈ ಸಾಮಾಜಿಕ ಪಾಪಗಳ ಬಗ್ಗೆ ತಿಳಿಹೇಳಿದರು.[೧]ಎಲ್ಲೆಡೆ ಹಬ್ಬಿರುವ ತಪ್ಪು ಮಾಹಿತಿಯೇನೆಂದರೆ ಮಹಾತ್ಮ ಗಾಂಧಿಯವರು ಈ ಏಳು ಪಾಪಗಳನ್ನು ಮೊಟ್ಟಮೊದಲನೆಯ ಬಾರಿಗೆ ಪಟ್ಟಿ ಮಾಡಿದರೆಂಬುದು. ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ೧೯೨೫ ರ ಅಕ್ಟೋಬರ್ ೨೨ರಂದು ಪ್ರಕಟಿಸಿ ಪ್ರಚುರಪಡಿಸಿದರಷ್ಟೆ[೨]

ತಾವು ಹತ್ಯೆ ಆಗುವ ಮೊದಲು ಈ ಪಟ್ಟಿಯನ್ನು ತಮ್ಮ ಮೊಮ್ಮಗ ಅರುಣ್ ಗಾಂಧಿಯವರಿಗೆ ನೀಡಿದ್ದರು.

ಏಳು ಪಾಪಗಳು ಯಾವುವೆಂದರೆ :

೧. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು

೨. ಆತ್ಮಸಾಕ್ಷಿಯಿಲ್ಲದ ಭೋಗ

೩. ಚಾರಿತ್ರ್ಯವಿಲ್ಲದ ಜ್ಞಾನ

೪. ನೀತಿಯಿಲ್ಲದ ವ್ಯಾಪಾರ

೫. ಮಾನವೀಯತೆಯಿಲ್ಲದ ವಿಜ್ಞಾನ

೬. ತ್ಯಾಗವಿಲ್ಲದ ಧರ್ಮ

೭. ನೀತಿಯಿಲ್ಲದ ರಾಜಕೀಯ [೩]

ಇತಿಹಾಸ ಮತ್ತು ಪ್ರಭಾವ[ಬದಲಾಯಿಸಿ]

ಮಹಾತ್ಮ ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ವಾರಪತ್ರಿಕೆಯಲ್ಲಿ ಪ್ರಕಟಿಸುವ ಮುನ್ನ ಈ ಪಟ್ಟಿಯನ್ನು ತಮ್ಮ ಸ್ನೇಹಿತರೊಬ್ಬರಿಂದ ಪತ್ರ ಮುಖೇನ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ, 'ಯಂಗ್ ಇಂಡಿಯಾ ಪತ್ರಿಕೆಯ ಓದುಗರು ಬೌದ್ಧಿಕವಾಗಿಯಷ್ಟೇ ಅಲ್ಲದೆ ಹೃದಯಾಂತರಾಳದಿಂದ ಈ ಪಟ್ಟಿಯನ್ನು ಮನಗಂಡು, ಇಲ್ಲಿ ನೀಡಿರುವ ಯಾವುದೇ ಪಾಪಗಳನ್ನು ಎಸೆಯದೇ ಇರಲಿ ಎಂದು ಆಶಿಸುತ್ತಾರೆ ಈ ಪಟ್ಟಿಯನ್ನು ಕಳುಹಿಸಿಕೊಟ್ಟ ನಮ್ಮ ಸ್ನೇಹಿತರು.' ಎಂದು ತಮ್ಮ ಪತ್ರಿಕೆಯಲ್ಲಿ ಗಾಂಧಿಯವರು ಬರೆದಿದ್ದರು. [೪] ಹಲವಾರು ಪುಸ್ತಕಗಳಲ್ಲಿ ಈ ಏಳು ಸಾಮಾಜಿಕ ಪಾಪಗಳ ಉಲ್ಲೇಖ ಇದೆ.

  • [೫] ಪುಸ್ತಕದಲ್ಲಿ ಪೀಟರ್. ಜೆ. ಗೋಮ್ಸ್ ರವರು ಬರೆಯುತ್ತಾರೆ - "ಗಾಂಧೀಯವರು ಪಟ್ಟಿಮಾಡಿರುವ ಏಳು ಪಾಪಗಳನ್ನು ನಾವು ತಡೆಯದಿದ್ದರೆ ಅವು ಮನುಷ್ಯರನ್ನೂ ದೇಶಗಳನ್ನೂ ಹಾನಿ ಮಾಡುತ್ತವೆಯೆಂದು ಬಹಳ ವರ್ಷಗಳ ಹಿಂದೆಯೇ ಕಂಡುಕೊಂಡೆನು. ಈ ಏಳು ಪಾಪಗಳು ಗಾಂಧಿಯವರ ಕಾಲದಲ್ಲಿ ಎಷ್ಟು ವ್ಯಾಪಕವಾಗಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ವ್ಯಾಪಕವಾಗಿವೆ. ಈ ಪಾಪಗಳ ವಿರುದ್ಧ ಯುದ್ಧ ಇಂದಿಗೂ ಪ್ರಸ್ತುತ."
  • Mobilizing hope: Faith-inspired activism for a post-civil rights generation ಪುಸ್ತಕದಲ್ಲಿ ಆ್ಯಡಮ್ ಟೇಯ್ಲರ್ ಎರಡು ಪಾಪಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ -"ಇತ್ತೀಚನ ಜಾಗತಿಕ ಹಣಕಾಸು ಹಿಂಜರಿತವು ಗಾಂಧಿಯವರು ಪ್ರತಿಪಾದಿಸಿದ್ದ ಏಳು ಸಾಮಾಜಿಕ ಪಾಪಗಳನ್ನು ನೆನಪಿಗೆ ತರುತ್ತದೆ. 'ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು' ಮತ್ತು 'ನೀತಿಯಿಲ್ಲದ ವ್ಯಾಪಾರ' ಗಳ ಅಪಾಯದ ಬಗ್ಗೆ ಗಾಂಧಿ ಎಂದೋ ಎಚ್ಚರಿಸಿದ್ದರು."
  • The Cambridge companion to Gandhi ಯಲ್ಲಿ 141ನೇ ಪುಟದಲ್ಲಿ ಈ ಏಳು ಪಾಪಗಳ ಪಟ್ಟಿ ಇದ್ದು ಉಲ್ಲೇಖವೇನೆಂದರೆ "ಇವು ಮತ್ತು ಗಾಂಧಿಯವರ ಬರಹಗಳು ಏನು ಹೇಳುತ್ತವೆಯೆಂದರೆ ಗಾಂಧಿಯವರು ತಮ್ಮ ಜೀವನವನ್ನು ಒಂದು ಚೌಕಟಿನಲ್ಲಿ ಬಂಧಿಸಿಡಲಿಲ್ಲ. ಅವರಿಗೆ ರಾಜಕೀಯ, ನೀತಿ ಹಾಗೂ ಧರ್ಮವನ್ನೊಳಗೊಂಡ ಆರ್ಥಿಕತೆ ಒಂದು ಅವಿಭಾಜ್ಯ ಅಂಗವಾಗಿತ್ತು."
  • Fifty key thinkers of development ಅಲ್ಲಿ, "ಈ ಪಾಪಗಳ ಹೊರತಾದ ಆದರ್ಶಗಳು ಇಂದಿಗೆ ಹೆಚ್ಚು ಪ್ರಸ್ತುತ." ಎಂದು ಹೇಳಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

  1. Seven Social Sins#cite note-yi1925 10 22-3
  2. SEVEN DEADLY SINS As per Mahatma Gandhi

ಉಲ್ಲೇಖ[ಬದಲಾಯಿಸಿ]