ವಿಷಯಕ್ಕೆ ಹೋಗು

ಅಚ್ಯುತರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಚ್ಯುತರಾಯ
ರಾಜಾಧಿರಾಜ

Statues depicting Achyuta Deva Raya (left) and his queen (right)
Emperor of Vijayanagara
ಆಳ್ವಿಕೆ 1529 – 1542 CE
ಪಟ್ಟಾಭಿಷೇಕ 30 November 1529
Vijayanagara, Vijayanagara Empire
ಪೂರ್ವಾಧಿಕಾರಿ ಕೃಷ್ಣದೇವರಾಯ
ಉತ್ತರಾಧಿಕಾರಿ ವೆಂಕಟ I
Consorts Varadambika
Tirumalamba
ಸಂತಾನ
ವೆಂಕಟ I
ತಂದೆ ತುಳುವ ನರಸ ನಾಯಕ
ತಾಯಿ ಓಬಾಂಬ[೧]
ಧರ್ಮ ಹಿಂದೂ


ಅಚ್ಯುತರಾಯ (೧೫೩೦-೧೫೪೨) ಅಥವಾ ಅಚ್ಚುತ ದೇವ ರಾಯ ಸುಪ್ರಸಿದ್ಧ ಕೃಷ್ಣದೇವರಾಯನ ಮರಣಾನಂತರ ವಿಜಯನಗರ ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ ತಿರುವಾಂಕೂರು ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ.

ಆಡಳಿತ[ಬದಲಾಯಿಸಿ]

ಅಚ್ಯುತರಾಯರು ಕನ್ನಡ ಕವಿ ಚಾಟು ವಿಟ್ಟಲನಾಥ, ಶ್ರೇಷ್ಠ ಸಂಯೋಜಕ ಮತ್ತು ಗಾಯಕ ಪುರಂದರದಾಸ, ಕರ್ನಾಟಕ ಸಂಗೀತದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರು ಮತ್ತು ಸಂಸ್ಕೃತ ವಿದ್ವಾಂಸ ರಾಜನಾಥ ಡಿಂಡಿಮ II ಅವರನ್ನು ಪೋಷಿಸಿದರು. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ ಅರವೀಡು ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ ಬಿಜಾಪುರದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ ಹೊಸಪೇಟೆ) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ ರಕ್ಕಸತಂಗಡಿ ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು. ತಿರುವೆಂಗಲನಾಥ ಮಂದಿರವನ್ನು ಅಚ್ಚುತರಾಯರ ಕಾಲದಲ್ಲಿ ಕಟ್ಟಲಾಯಿತು.ಇದು ಅಚ್ಚುತರಾಯ ದೇವಾಲಯವೆಂದು ಪ್ರಸಿದ್ಧವಾಗಿದೆ.

ಅವರ ಮರಣದ ನಂತರ, ಉತ್ತರಾಧಿಕಾರ ವಿವಾದವಾಯಿತು. ಅವನ ಮಗ ವೆಂಕಟ I ಅವನ ಉತ್ತರಾಧಿಕಾರಿಯಾದನು ಆದರೆ ಬಹಳ ಕಡಿಮೆ ಅವಧಿಗೆ ಆಳಿದನು ಮತ್ತು ಅಸ್ತವ್ಯಸ್ತವಾಗಿರುವ ಉತ್ತರಾಧಿಕಾರ ವಿವಾದದಲ್ಲಿ ಕೊಲ್ಲಲ್ಪಟ್ಟನು, ಇದರಲ್ಲಿ ಸಿಂಹಾಸನದ ಅನೇಕ ಹಕ್ಕುದಾರರು ಕೊಲ್ಲಲ್ಪಟ್ಟರು. ಅವನ ಸೋದರಳಿಯ, (ಕಿರಿಯ ಸಹೋದರನ ಮಗ) ಸದಾಶಿವರಾಯನು ಅಂತಿಮವಾಗಿ ಇನ್ನೂ ಮಗುವಾಗಿದ್ದಾಗ, ಕೃಷ್ಣದೇವರಾಯನ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಚಕ್ರವರ್ತಿಯಾದಾಗ ವಿವಾದವು ಕೊನೆಗೊಂಡಿತು. ಅವನ ಹೆಂಡತಿಯ ಹೆಸರು ಬಹುಶಃ ವಸುಧಾದೇವಿ. ಸದಾಶಿವರಾಯರು ಪ್ರಾಯಶಃ ವಸುಧಾದೇವಿಯ ಸಹೋದರಿ ಹೇಮಾವತಿ ಮತ್ತು ಆಕೆಯ ಪತಿ ರಂಗರಾಯರ ಮಗ.

ಅಚ್ಯುತರಾಯನ ಆಳ್ವಿಕೆಯಲ್ಲಿ ಕ್ರಿ.ಶ. ೧೫೩೯ ರಲ್ಲಿ ತಿಮ್ಮಲಾಪುರದಲ್ಲಿ ನಿರ್ಮಾಣವಾದ ಶಿವದೇವಾಲಯ
ತಿಮ್ಮಲಾಪುರದ ಶಿವಮಂದಿರದಲ್ಲಿರುವ ಕ್ರಿ.ಶ ೧೫೩೯ ರ ಅಚ್ಯುತರಾಯನ ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ಹತ್ತಿರ ತಿಮ್ಮಲಾಪುರದಲ್ಲಿ ದೊರೆ ಅಚ್ಯುತರಾಯನು ಕಟ್ಟಿಸಿದ ಶಿವದೇವಾಲಯ

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. Ayyangar, Krishnaswamy (1919). Sources of Vijayanagar History. Chennai: University of Madras. p. 16.